ಗೀತ ಗಾಯನದಲ್ಲಿ ಜಿಲ್ಲಾ ಮಟ್ಟಕ್ಕೆ ಎಚ್.ಎಮ್.ಎಮ್, ವಿ.ಕೆ.ಆರ್ ಶಾಲೆಯ ವಿದ್ಯಾರ್ಥಿಗಳು. - August 25, 2023

ಕುಂದಾಪುರ : ಭಾರತ್ ಸ್ಕೌಟ್ ಮತ್ತು ಗೈಡ್ಸ್ ನ ಆಶ್ರಯದಲ್ಲಿ ಕುಂದಾಪುರದ ವ್ಯಾಸರಾಯ ಸಭಾಭವನದಲ್ಲಿ ಹಮ್ಮಿಕೊಂಡ ಗೀತಗಾಯನ ಸ್ಪರ್ಧೆಯಲ್ಲಿ, ಕುಂದಾಪುರ ಎಜುಕೇಶನ್ ಸೊಸೈಟಿ ಪ್ರವರ್ತಿತ ಎಚ್.ಎಮ್.ಎಮ್ ಮತ್ತು ವಿ.ಕೆ.ಆರ್ ಆಂಗ್ಲ ಮಾಧ್ಯಮ ಶಾಲೆಗಳ ಅನೇಕ ವಿದ್ಯಾರ್ಥಿಗಳು ಭಾಗವಹಿಸಿ ವಿಜೇತರಾಗಿರುತ್ತಾರೆ.

           ಸಂಸ್ಥೆಯ ಬುಲ್ ಬುಲ್ ತಂಡದ ವಿದ್ಯಾರ್ಥಿಗಳಾದ ರಿನೊಲಾ, ಸಂಹಿತಾ, ಪ್ರಕೃತಿ, ಸಿಂಚನಾ ಮತ್ತು ಗೋಪಿಕಾ, ಸ್ಕೌಟ್ ತಂಡದ ವಿದ್ಯಾರ್ಥಿಗಳಾದ ಕೌಸ್ತುಭ, ಶ್ರವಣ್, ಕೌಶಿಕ್, ಅರುಶ್, ಸಾತ್ವಿಕ್, ನಿರಂಜನ್ ಉಡುಪ, ತ್ರಿಶೂಲ್ ಮತ್ತು ಪ್ರಣವ್ ಗೀತಗಾಯನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ ಮತ್ತು ಪ್ರೌಢಶಾಲಾ ಗೈಡ್ಸ್ ತಂಡದ ವಿದ್ಯಾರ್ಥಿಗಳಾದ ಜಯಶ್ರೀ, ಅನುಷಾ, ಕೀರ್ತನಾ, ಸಿಂಚನಾ, ಗಾರ್ಗಿದೇವಿ, ಬ್ರಾಹ್ಮಿ ಉಡುಪ ಮತ್ತು ಶ್ರೇಯಾ ಪ್ರಥಮ ಸ್ಥಾನವನ್ನು ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

           ಶಾಲೆಯ ಸಂಗೀತ ಶಿಕ್ಷಕ ಪ್ರಕಾಶ್ ರವರ ತರಬೇತಿಯಲ್ಲಿ ವಿಜೇತರಾದ ವಿದ್ಯಾರ್ಥಿಗಳನ್ನು ಸಂಸ್ಥೆಯ ಪ್ರಾಂಶುಪಾಲರಾದ ಡಾ. ಚಿಂತನಾ ರಾಜೇಶ್, ವಿವಿಧ ವಿಭಾಗಗಳ ಮುಖ್ಯಸ್ಥರು ಮತ್ತು ಅಕಾಡೆಮಿಕ್ ಕೋಆರ್ಡಿನೇಟರ್ಸ್ ಅಭಿನಂದಿಸಿದರು.


45 Years of experience with the best guidance and relevence

Contact Us

© 2021 V K R Acharya Memorial English High School - All Rights Reserved